Posts

Showing posts from 2013

ಮೂಢನಂಬಿಕೆ ವಿರೋಧಿ ಸಿಎಂ ಸಿದ್ದು ನಿನ್ನೆ ಮಾಡಿದ್ದೇನು? Read more at: http://kannada.oneindia.in/news/karnataka/anti-superstitionist-cm-siddaramaiah-follows-rahu-kaal-079115.html

Image
ಬೆಂಗಳೂರು, ನ.9: ರಾಜ್ಯದ ಜನತೆ ಮೇಲೆ ಮೂಢನಂಬಿಕೆ ನಿಷೇಧ ರಾಕೆಟ್ಟನ್ನು ಹಾರಿಸಲು ಸಿದ್ಧತೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಶುಭ ಶುಕ್ರವಾರ ಭರಪೂರವಾಗಿ ಮೂಢನಂಬಿಕೆ ಆಚರಿಸಿ ಸಂಭ್ರಮಿಸಿದ್ದಾರೆ. ಅದೂ ಒಂದಲ್ಲ, ಎರಡು ಬಾರಿ ಸಿದ್ದರಾಮಯ್ಯನವರ ಮೌಢ್ಯತೆ ಜಗಜ್ಜಾಹೀರಾಗಿ ಹರಾಜಾಯಿತು. ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಚಿಕ್ಕಬಳ್ಳಾಪುರ-ಕೋಲಾರ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಡಿನ ಮುಖ್ಯಮಂತ್ರಿ ಮೂಢನಂಬಿಕೆ ವಿರುದ್ಧ ಹೈಸ್ಪೀಡಿನಲ್ಲಿದ್ದಾರೆ. ಜತೆಗೆ ಅವರಿಗೆ ಕಂದಾಚಾರಗಳು ಆಗಿಬರುವುದಿಲ್ಲ ಎಂಬುದನ್ನು ತಿಳಿದುಕೊಂಡ ರೈಲ್ವೆ ಅಧಿಕಾರಿಗಳು ಕಾರ್ಯಕ್ರಮವನ್ನು ರಾಹುಕಾಲದಲ್ಲಿಯೇ ನಿಗದಿಪಡಿಸಿ ಯಾವುದೋ ಕಾಲವಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಎಚ್ಚೆತ್ತ ಸಿಎಂ ಸಿಬ್ಬಂದಿ ರಾಹುಕಾಲದಲ್ಲಿ ಉದ್ಘಾಟನೆ ಸಮಾರಂಭ ಬೇಡವೇ ಬೇಡ. ತಡವಾದರೂ ಪರವಾಗಿಲ್ಲ ಎಂದು ಸಿದ್ದರಾಮಯ್ಯ ಅವರನ್ನು 90 ನಿಮಿಷ ಕಾಲ ಕಾಯುವಂತೆ ಮಾಡಿ, ರಾಹುಕಾಲ ಮುಗಿದ ನಂತರ ಕಾರ್ಯಕ್ರಮ ಶುರು ಹಚ್ಚಿಕೊಂಡರು. ಗಮನಾರ್ಹವೆಂದರೆ ಸಿಎಂ ಸಿದ್ದು ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ತನ್ಮೂಲಕ ತಾವೂ ಮೂಢನಂಬಿಕೆಗೆ ಆತೀತರಲ್ಲ ಎಂಬುದನ್ನು ಸಾರಿ ಹೇಳಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ನಂದಿ ರಂಗಮಂದಿರದಲ್ಲಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಮಧ...

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು

Image

ನನ್ನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

Image

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ...

Image
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ । ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥೦೮॥ (ಧರ್ಮವು ಶಿಥಿಲವಾಗಿ ಅಧರ್ಮವೇ ತಾಂಡವ ಆಡುವಾಗ) ಸಜ್ಜನರ ರಕ್ಷಣೆಗಾಗಿ (ಉದ್ಧಾರಕ್ಕಾಗಿ), ದುಷ್ಟರ ನಾಶಮಾಡಿ ಧರ್ಮತತ್ವಂಗಳ ಮತ್ತೆ ಸ್ಥಾಪಿಸುವದಕ್ಕಾಗಿ ನಾನು ಪ್ರತಿ ಯುಗದಲ್ಲಿ ಅವತರಿಸುತ್ತೆ. -ಶ್ರೀಕೃಷ್ಣಪರಮಾತ್ಮ

A protector for the peace and prosperity of the present and posterity!

Image
A protector for the peace and prosperity of the present and posterity! The images of diverse population lining up to tie “Rakhi” on the wrist of Narendra Modi symbolic in itself. It shows the faith people want to repose in a leader they see as their Rakshak – protector.  The positive energy was evident on the morning of 20 th  August when over 5000 women gathered in Gandhinagar to celebrate this auspicious festival with Narendra Modi. They hailed from different states of India, even different nations but they had come with a common purpose- to tie Rakhis on Narendra Modi. Rakshabandhan comes every year; however, this time around the times are different.  The festive mood seems to have been eroded by a sinking national spirit.  Brave jawans being ambushed by a cowardly neighbour at the borders, the economy staring in the face of an unprecedented crisis, corruption scandals testing the faith of the people in democratic principles and the country almost frozen...

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರೋತ್ಸವದ ಶುಭಾಶಯಗಳು

Image

ಟೈಗರ್ ಹಿಲ್ಸ್ ಗೆದ್ದ ಟೈಗರ್‌ಗಳಿಗೆ ನಮನ

Image
Thanks To News13.   http://news13.in/2013/07/34450/ ಕಾರ್ಗಿಲ್ ಕದನ. ಅದೊಂದು ಭಾರತದ ಇತಿಹಾಸದಲ್ಲಿ ಮರೆಯಲಾರದ ಯುದ್ಧ. ಭಾರತ-ಪಾಕಿಸ್ತಾನಗಳ ನಡುವೆ ನಡೆದ ನಾಲ್ಕನೇ ಯುದ್ಧ. ಉಭಯ ದೇಶಗಳ ನಡುವೆ ಸುಧಾರಿಸಲಾರದಷ್ಟು ಸಂಬಂಧ ಹಳಸಿದೆ ಎನ್ನುವುದಕ್ಕೆ ಈ ಯುದ್ಧಗಳು ನಿದರ್ಶನ. ಮುಂದಿನ ಪೀಳಿಗೆ ನಮ್ಮ ಚರಿತ್ರೆಯ ಪುಟಗಳನ್ನು ತಿರುವಿ ಈ ಯುದ್ಧದ ವಿವರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಬಹುದು. ಏಕೆಂದರೆ ಈ ಯುದ್ಧ ಅಷ್ಟು ರೋಚಕವಾಗಿತ್ತು. ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿರುವ ಕಾರ್ಗಿಲ್ ಈ ಹಿಂದೆ ಒಂದು ಜಿಲ್ಲಾಕೇಂದ್ರದ ಹೆಸರಾಗಿ ಉಳಿದಿತ್ತು. ದೇಶವಾಸಿಗಳಿಗೆ ಆ ಹೆಸರು ಅಷ್ಟೇನೂ ಪರಿಚಿತವಾಗಿರಲಿಲ್ಲ. ಆದರೆ ಈಗ ಕಾರ್ಗಿಲ್ ಎಂದ ಕೂಡಲೇ ದೇಶವಾಸಿಗಳ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆಗಳ ಸಂಚಾರವಾಗುತ್ತದೆ. ಹಲವು ತೆರನಾದ ಭಾವನೆಗಳು ಉಕ್ಕಿ ಹರಿಯುತ್ತವೆ. ವಂಚನೆ, ಉದ್ವಿಗ್ನತೆ, ಕೋಪ, ದುಃಖ, ನಿರ್ಧಾರ, ಸಾಹಸ, ಪರಾಕ್ರಮ, ವಿಜಯ, ಸಂಭ್ರಮ – ಹೀಗೆ ಹತ್ತು ಹಲವು ಭಾವನೆಗಳು ಅನುರಣಿಸುತ್ತವೆ. 1999 ರ ಮೇ 8 ರಿಂದ ಜುಲೈ 14 ರವರೆಗೆ ನಡೆದ ಆ 74 ದಿನಗಳು, ದೇಶಾದ್ಯಂತ ಪೂರ್ತಿ ಕಾರ್ಗಿಲ್ ಯುದ್ಧದ್ದೇ ಸುದ್ದಿ. ಮಾಧ್ಯಮಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಯುದ್ಧದ ಸುದ್ದಿಗಳಿಗೇ ಆದ್ಯತೆ. ಉಳಿದೆಲ್ಲ ಕಾರ್ಯಕ್ರಮಗಳು ಮೂಲೆಗೆ. ಏನಾಯಿತು ಕಾರ್ಗಿಲ್‌ನಲ್ಲಿ ? ಇವತ್ತು ಪಾಕ್ ಶತ್ರುಗಳೆಷ್ಟು ಮಂದಿ ಸತ್ತರು ? ಭಾರ...

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿಗೆ ಭರ್ಜರಿ ಜಯ, ಎನ್‍ಎಸ್‍ಯುಐ ಹಾಗೂ ಸಿಎಫ್‍ಐಗೆ ತೀವ್ರ ಮುಖಭಂಗ.

Image
ಮಂಗಳೂರು ಜು 22: ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆ ತುಂಬಾ ವರ್ಷಗಳಿಂದ ಕುತೂಹಲ ದಿಂದ ಕೂಡಿರುವ ಚುನಾವಣೆ. ಈ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ, ಎನ್‍ಎಸ್‍ಯುಐ ಹಾಗೂ ಸಿಎಫ್‍ಐ ಯ ಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಅದರಲ್ಲಿ ಒಟ್ಟು 31 ಸೀಟ್‍ನಲ್ಲಿ 26 ಸೀಟ್‍ಗಳನ್ನು ಎಬಿವಿಪಿ ಕಾರ್ಯಕರ್ತರು ಗೆಲ್ಲುವ ಮೂಲಕ ಭರ್ಜರಿ ಜಯವನ್ನು ಸಾಧಿಸಿದ್ದಾರೆ. ಕೇವಲ 5 ಸೀಟ್‍ನ್ನು ಪಡೆಯುವುದರ ಮೂಲಕ ಎನ್‍ಎಸ್‍ಯುಐ ತೀವ್ರ ಮುಖಭಂಗವನ್ನು ಅನುಭವಿಸಿದೆ. ಯಾವುದೇ ಖಾತೆಯನ್ನು ತೆರೆಯದೆ ಸಿಎಫ್‍ಐ ಸೋಲನುಂಡಿತು. ಈ ಚುನಾವಣೆಯು ದೇಶಭಕ್ತಿಯ ವಿಚಾರಕ್ಕೆ ಸಂದ ಜಯವಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ ಕಾರ್ಯದರ್ಶಿಯಾಗಿ ಮಹೇಶ್ ರಾಜ್ ಮೂರನೇ ಬಿಎ ಲಲಿತಕಲಾ ಕಾರ್ಯದರ್ಶಿಯಾಗಿ ಅವಿನಾಶ್ ಮೂರನೇ ಬಿಎ ಜೊತೆ ಕಾರ್ಯದರ್ಶಿಯಾಗಿ ಶ್ವೇತಾ ಮೂರನೇ ಬಿಬಿಎಂ ಜೊತೆ ಲಲಿತಕಲಾ ಕಾರ್ಯದರ್ಶಿಯಾಗಿ ಪವಿತ್ರಾ ಮೂರನೇ ಬಿಕಾಂ ಚುನಾವಣೆಯ ನಂತರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ರಾಜ್ಯ ಕಾರ್ಯದರ್ಶಿ ರಮೇಶ್ .ಕೆ, ನಗರ  ಕಾರ್ಯದರ್ಶಿ ಯತೀಶ್ ಕುಮಾರ್. ಪಿ, ನಿಕಟಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರು ಪ್ರಸಾದ್, ತೇಜಸ್ಸು, ಯಶೋಧರ ಅಭಿನಂಧಿಸಿದರು. ವಿಜಯೋತ್ಸವ: ಎಬಿವಿಪಿಯ ಕಾರ್ಯಕರ್ತರು 26 ಸೀಟು...

ಇಂದು ಶ್ಯಾಮಪ್ರಸಾದ್‌ ಮುಖರ್ಜಿ, ವಿ.ಎಸ್‌. ಆಚಾರ್ಯ ಜನ್ಮದಿನ

Image
ಇಂದು ಶ್ಯಾಮಪ್ರಸಾದ್‌ ಮುಖರ್ಜಿ, ವಿ.ಎಸ್‌. ಆಚಾರ್ಯ ಜನ್ಮದಿನ by Udayavani | Jul 06, 2013 "ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ರಾಷ್ಟ್ರ ಧ್ವಜಗಳಿದ್ದರೆ ಅದು ರಾಷ್ಟ್ರೀಯತೆಗೆ ಅಪಮಾನ ಮತ್ತು ಅಪಚಾರ' -ಹೀಗೆಂದು ಲೋಕಸಭೆಯಲ್ಲಿ ಘರ್ಜಿಸಿದ ಭಾರತದ ಪಾರ್ಲಿಮೆಂಟಿನ ಸಿಂಹವೇ ಡಾ| ಶ್ಯಾಮಪ್ರಸಾದ್‌ ಮುಖರ್ಜಿ. 1950ರ ದಶಕದ ಆರಂಭದ ವರ್ಷಗಳಲ್ಲಿ ಭಾರತದ ಸಾರ್ವಭೌಮತೆಯ ಸಂಕೇತವಾದ ಸಂಸತ್ತಿನಲ್ಲಿ ಆಳುವ ಸರಕಾರದ ದುರ್ಬಲ ನೀತಿಗಳನ್ನು ತನ್ನ ನೇರ ಹಾಗೂ ಹರಿತವಾದ ಭಾಷಣ, ನಿರ್ದಾಕ್ಷಿಣ್ಯದ ಮುಕ್ತ ಶಬ್ದಗಳಿಂದ ಖಂಡಿಸುತ್ತಾ ಭಾರತದ ಅಂದಿನ ಪ್ರಧಾನಿ ನೆಹರೂ ಅವರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದ್ದ ಭಾರತದ ಕೇಸರಿಯೇ ಅಪ್ಪಟ ರಾಷ್ಟ್ರಭಕ್ತ ಡಾ| ಮುಖರ್ಜಿ.ಕೋಲ್ಕತ್ತದ ಅಶುತೋಷ್‌ ರಸ್ತೆಯ 77ನೇ ನಂಬರ್‌ ಮನೆಯಲ್ಲಿ 1901ರ ಜು.6 ರಂದು ಮುಖರ್ಜಿ ಜನಿಸಿದರು. ವಿದ್ಯಾರ್ಥಿ ಜೀವನ ದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬದುಕಿದರು, ಸಹಪಾಠಿಗಳಲ್ಲಿ ರಾಷ್ಟ್ರಾಭಿಮಾನ ಉಕ್ಕುವಂತೆ ವರ್ತಿಸುತ್ತಿದ್ದರು.ಉನ್ನತ ಶಿಕ್ಷಣ ಪಡೆದ ಮುಖರ್ಜಿ ತಮ್ಮ 33ನೇ ವರ್ಷದಲ್ಲಿ ಕೋಲ್ಕತ್ತಾ ವಿವಿಯ ಉಪಕುಲಪತಿಯಾಗಿ ನೇಮಕಗೊಂಡು ಈ ಘನಹುದ್ದೆ ಅಲಂಕರಿಸಿದ ಅತಿ ಕಿರಿಯನೆಂಬ ದಾಖಲೆ ನಿರ್ಮಿಸಿದರು.ತಾವು ನಂಬಿದ ಸಿದ್ಧಾಂತದೆದುರು ಕೇಂದ್ರದ ಮಂತ್ರಿಸ್ಥಾನವೂ ಸೇರಿದಂತೆ ಎಲ್ಲಾ ಅಧಿಕಾರಗಳೂ ಮುಖರ್ಜಿಯವರಿಗೆ ತೃಣ ಸಮಾನವಾಗಿದ್ದವು. ಸ್ವತ...

Congratulations to scientists of ISRO on successful launch of India's 1st dedicated navigation satellite, IRNSS-1A: Shri Modi on Twitter

Image
Photo Credits: ISRO Website On the afternoon of Tuesday 2 nd  July 2013 Shri Narendra Modi extended his congratulations to scientists of ISRO on the successful launch of IRNSS-1A, India’s first dedicated navigational satellite. Shri Modi Tweeted,   “Congratulations to scientists of ISRO on successful launch of India’s 1st dedicated navigation satellite, IRNSS-1A.” Photo Credits: ISRO Website

ಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ ರೂಪಾಯಿಗೊಂದು ಕೆಜಿ ಅಕ್ಕಿ!

Image
ಬೆತ್ತಲೆ ಪ್ರಪಂಚ - ಪ್ರತಾಪ್ ಸಿಂಹ ಖ್ಯಾತ ಸಾಹಿತಿ ಬೀChiಯುವರ 'ಬೆಳ್ಳಿ ತಿಂಮ ನೂರೆಂಟು ಹೇಳಿದ' ಪುಸ್ತಕದಲ್ಲಿ ಒಬ್ಬ ರಾಜಕಾರಣಿಯ ಕಥೆ ಬರುತ್ತದೆ. ಮೈದಾನಕ್ಕೆ ಕಾಪೌಂಡ್ ಇಲ್ಲ, ಭಾಷಣಕ್ಕೆ ಇತಿಮಿತಿಯಿಲ್ಲ, ಹೇಳುವವರಿಗೆ ಬೇಸರವಿಲ್ಲ, ಕೇಳುವವರಿಗೆ ಬೇರೆ ಕೆಲಸವಿಲ್ಲ. ರಾಜಕಾರಣಿಯ ಭಾಷಣ ಹರಿಯಿತು, ಊರ ಮಧ್ಯೆಯ ಗಟಾರದಂತೆ. ರಾಜಕಾರಣಿ: ಇಂದು ನಮ್ಮ ಜನಕ್ಕೆ ಏನು ಬೇಕು ಹೈಡ್ರೋಜನ್, ಆಟಂ ಬಾಂಬುಗಳೇನು? 'ಅಲ್ಲ, ಅಲ್ಲ..' ಎಂದು ಒಕ್ಕೊರಲಿನಿಂದ ಕೂಗಿತು ಸಭೆ. ರಾಜಕಾರಣಿ: ಸಾವಿರಾರು ಮೈಲು ಸಮುದ್ರವನ್ನು ಹಾರುವ ವಿಮಾನವೇನು? ಜನ: ಅಲ್ಲ, ಅಲ್ಲ! ಅದರಿಂದ ಉತ್ತೇಜಿತನಾದ ರಾಜಕಾರಣಿ ಹೇಳಿದ-'ನಮಗೆ ಬೇಕಿರುವುದು ಶರವೇಗದ ರೈಲು ಗಾಡಿಯಲ್ಲ, ಲಗ್ಝುರಿ ಬಸ್‌ಗಳಲ್ಲ, ಜೇಡರಗೂಡಿನಂಥ ಬಟ್ಟೆಯಲ್ಲ. ಇಂದು ನಮಗೆ ಬೇಕಿರುವುದು......' ಅಷ್ಟರಲ್ಲಿ ಸೋಮಾರಿಗಳ ಮಹಾಸಭೆಯಿಂದ ಕರತಾಡನ... ರಾಜಕಾರಣಿ: ಇಂದು ನಮಗೆ ಏನು ಬೇಕು? ನಮ್ಮ ಭೂತಾಯಿಯ ಚೊಚ್ಚಲ ಮಗನಾದ ರೈತನಿಗೆ, ಅನುದಿನವೂ ದುಡಿಯುವ ಕೂಲಿಗೆ, ಪ್ರತಿಯೊಬ್ಬನಿಗೂ ಬೇಕು ಅನ್ನ.. ಅನ್ನ! ಜನ: ಅಹುದು, ಅಹುದಹುದು! ರಾಜಕಾರಣಿ: ನಮ್ಮ ಬಡವನ ರೂಪಾಯಿಗೆ ಹತ್ತು ಸೇರಿನ ಅಕ್ಕಿ ಬೇಕು! ನಮ್ಮ ಕರ್ನಾಟಕದ ಮುಂದಿನ ಸರ್ಕಾರವನ್ನು ರಚಿಸಲು ಅಣಿಯಾಗುತ್ತಿರುವ ಕಾಂಗ್ರೆಸ್ ಹಾಗೂ ಈ ಹಿಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಗಬ್ಬೆಬ್ಬಿಸಿದ ಬಿಜೆಪಿ ಇವುಗಳೆರಡೂ ಬ...

ಇಫ್ತಾರ್ ಕೂಟದಲ್ಲಿ ಕ್ಯಾಪ್ ಹಾಕಿಕೊಂಡವರೆಲ್ಲಾ ಮುಸಲ್ಮಾನರಿಗೆ ಹಾಕಿದ್ದೂ ಟೋಪಿಯನ್ನೇ ಮಿಸ್ಟರ್ ನಿತೀಶ್‌ಕುಮಾರ್!

Image
- ಪ್ರತಾಪ್ ಸಿಂಹ ಬೆತ್ತಲೆ ಪ್ರಪಂಚ ಟೋಪಿ ಔರ್ ತಿಲಕ್! ಕಳೆದ ಏಪ್ರಿಲ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಪರೋಕ್ಷವಾಗಿ ಕುಟುಕುತ್ತಾ, "ಕಭಿ ಟೋಪಿ ಭಿ ಪಹನ್ನಾ ಪಡ್ತಾ ಹೈ, ಕಭಿ ಟಿಕಾ ಭಿ ಲಗಾನಾ ಪಡ್ತಾ ಹೈ", ಅಂದರೆ ಕೆಲವೊಮ್ಮೆ ಟೋಪಿಯನ್ನೂ(ಮುಸಲ್ಮಾನರ) ಹಾಕಬೇಕಾಗುತ್ತದೆ, ತಿಲಕವನ್ನೂ(ಹಿಂದುಗಳ) ಇಟ್ಟುಕೊಳ್ಳಬೇಕಾಗುತ್ತದೆ ಎಂದಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರರ ನಿಜ ಬಣ್ಣ, ಉದ್ದೇಶ ಬಯಲಾಗಿತ್ತು. ಮುಂದುವರೆದು, "ಕೇವಲ್ ಹವಾ ಬನಾನೆ ಸೆ ಕುಛ್ ನಹೀ ಹೋಗಾ" ಎಂದಾಗಲಂತೂ ಅವರು ನರೇಂದ್ರ ಮೋದಿಯವರ ಬಗ್ಗೆ ಮತ್ಸರ ಹೊಂದಿದ್ದಾರೆ  ಮಾತ್ರವಲ್ಲ, ಸ್ವತಃ ಪ್ರಧಾನಿಯಾಗ ಬೇಕೇಂಬ ಮಹತ್ವಾಕಾಂಕ್ಷೆಯನ್ನೂ ಹೊಂದಿದ್ದಾರೆ ಎಂಬುದೂ ಸ್ಪಷ್ಟವಾಗಿ ಗೋಚರಿಸಿತ್ತು. ಹೀಗಾಗಿ... ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನರೇಂದ್ರ ಮೋದಿಯವರನ್ನು ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದಾಗ, "ಅದು ಬಿಜೆಪಿಯ ಆಂತರಿಕ ವಿಚಾರ" ಎಂದು ಪ್ರಾರಂಭದಲ್ಲಿ ಹೇಳಿದ್ದ ಜೆಡಿಯು, ಆಡ್ವಾಣಿ ಪ್ರಹಸನ ಹಾಗೂ ಕುಮ್ಮಕ್ಕಿನ ನಂತರ ಮತ್ತೆ ಮೋದಿ ವಿಚಾರದಲ್ಲಿ ತಗಾದೆ ತೆಗೆದು 17 ವರ್ಷಗಳ ಮೈತ್ರಿಯನ್ನೇ ಮುರಿದು ಹೊರ ನಡೆದಿದೆ. ಆದರೆ ಈ ನಿತೀಶ್‌ಕುಮಾರರ ಮಾತು ನಡತೆಗಳ ಹಿಂದಿನ ಉದ್ದೇಶ, ಅರ್ಥವಾದರೂ ಏನು? 2003ರಲ್ಲಿ ಗುಜರಾತ್ ಮುಖ್ಯಮಂತ್ರಿಯನ್...

ಪೇಸ್‌ಗೆ ನಲವತ್ತು, ಇದು ಕೃತಜ್ಞತೆ ಅರ್ಪಿಸುವ ಹೊತ್ತು!

Image
ಬೆತ್ತಲೆ ಪ್ರಪಂಚ - ಪ್ರತಾಪ್ ಸಿಂಹ ಲಿಯಾಂಡರ್ ಪೇಸ್ ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದರಿಂದ ಅವರ ಮೊಬೈಲ್‌ಗೆ ಮೆಸೇಜ್ ಬಂತು- "ಬಾಂಬೆ ಹಾಸ್ಪಿಟಲ್‌ನ ಡಾ. ಭೀಮ್‌ಸಿಂಘಾಲ್‌ರನ್ನು ಕೂಡಲೇ ಸಂಪರ್ಕಿಸಿ". ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್‌ಗೆ ಹೋದರೂ ಫಲಕಾರಿಯಾಗದೆ ವಾಪಸ್ ಬಂದಿದ್ದರು. ಹೀಗೆ ಯಾವುದೇ ದಾರಿ ಕಾಣದೆ ಕೈಚೆಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಡಾ. ಭೀಮ್ ಸಿಂಘಾಲ್ ಮುಂಬೈನಲ್ಲೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ, ಗುಣಪಡಿಸಿದ್ದರು. ಹೌದು, ಡಾ. ವೆಸ್ ಪೇಸ್ ಮಗನ ಮೆದುಳಿನಲ್ಲಿ ಕೂಡ ಗಡ್ಡೆ ಬೆಳೆದಿತ್ತು. ಆತ 'ಸಿನ್‌ಸಿನಾಟಿ ಮಾಸ್ಟರ್ಸ್‌' ಟೆನಿಸ್ ಟೂರ್ನಿಯಲ್ಲಿ ಆಟವಾಡುತ್ತಿದ್ದಾಗ ಮೈದಾನದಲ್ಲೇ ಕುಸಿದಿದ್ದ, ತೀವ್ರತಲೆನೋವು, ತಲೆಸುತ್ತು, ಸುಸ್ತು ಕಾಣಿಸಿಕೊಂಡಿದ್ದರಿಂದ ಅಮೆರಿಕದ ಆರ್ಲ್ಯಾಂಡೋದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದು ಕ್ಯಾನ್ಸರ್ ಗಡ್ಡೆಯಿರಬಹುದು ಎಂದು ಸಂಶಯಪಡಲಾಗಿತ್ತು. ಬದುಕುಳಿಯುವ ಸಾಧ್ಯತೆ ಬಗ್ಗೆ ಅನುಮಾನಗಳು ಆರಂಭವಾಗಿದ್ದವು. ಅಂದಹಾಗೆ ಡಾ. ವೆಸ...

ಮೊಬೈಲ್ ರೋಮಿಂಗ್ ದರ ಇಳಿಕೆ

  ಮೊಬೈಲ್ ಬಳಕೆದಾರರಿಗೊಂದು ಸಿಹಿ ಸುದ್ದಿ! ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸೋಮವಾರ ಮೊಬೈಲ್ ಕರೆ ಹಾಗೂ ಎಸ್‌ಎಂಎಸ್‌ಗಳ ಮೇಲಿನ ರೋಮಿಂಗ್ ದರವನ್ನು ಕಡಿತಗೊಳಿಸಿದೆ. ಈ ನೂತನ ದರ ಜು.1ರಿಂದ ಜಾರಿಗೆ ಬರಲಿದೆ. ಇದಲ್ಲದೆ ಎಸ್‌ಟಿವಿ(ಸ್ಪೆಷಲ್ ಟ್ಯಾರಿಫ್ ವೋಚರ್ಸ್) ಮತ್ತು ಕಾಂಬೋ ವೊಚರ್ಸ್ ಎನ್ನುವ ಎರಡು ರೀತಿಯ ಯೋಜನೆಗಳನ್ನು ಗ್ರಾಹಕರಿಗೆ ನೀಡುವಂತೆ ಟ್ರಾಯ್ ಮೊಬೈಲ್ ಸೇವಾದಾರರಿಗೆ ಸೂಚಿಸಿದೆ. ಈ ಷರತ್ತುಬದ್ಧ ಮುಕ್ತ ರೋಮಿಂಗ್ ಯೋಜನೆಗಳು ಮೊಬೈಲ್ ರೋಮಿಂಗ್ ದರವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ನೆರವು ನೀಡಲಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಳದಿಂದಾಗಿ ರಾಷ್ಟ್ರೀಯ ರೋಮಿಂಗ್‌ಗೆ ಸಂಬಂಧಿಸಿದ ವೆಚ್ಚ ಇಳಿಕೆಯಾಗಿದೆ. ಆದರೆ, ರೋಮಿಂಗ್‌ಗಾಗಿ ಸದ್ಯ ಮೊಬೈಲ್ ಸೇವಾದಾರರು ಒಂದಷ್ಟು ವೆಚ್ಚ ಮಾಡಲೇ ಬೇಕಿದೆ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಮುಕ್ತ ರೋಮಿಂಗ್ ಸೌಲಭ್ಯ ಕಲ್ಪಿಸುವುದು ಕಾರ್ಯಸಾಧುವಲ್ಲ. ಒಂದು ವೇಳೆ ಮುಕ್ತ ರೋಮಿಂಗ್ ಸೇವೆ ಜಾರಿಗೊಳಿಸಿದರೆ ಆಗುವ ನಷ್ಟವನ್ನು ಮೊಬೈಲ್ ಸೇವಾದಾರರು ಗ್ರಾಹಕರ ಮೇಲೆ ಹೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟ್ರಾಯ್ ಸದ್ಯ ದರ ಕಡಿತಗೊಳಿಸುವ ನಿರ್ಧಾರವನ್ನಷ್ಟೇ ಪ್ರಕಟಿಸಿದೆ. ಆದರೆ, ಸದ್ಯಕ್ಕೆ ರೋಮಿಂಗ್ ಮುಕ್ತ ಸೇವೆ ಜಾರಿಗೊಳಿಸುವುದಿಲ್ಲ ಎಂದೂ ಟ್ರಾಯ್ ಹೇಳಿದೆ. ನೂತನ ದರ: 2007ರಲ್ಲಿ ಟ್ರಾಯ್ ಸ್ಥಳೀಯ ರೋಮಿಂಗ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 1.40, ಎಸ್‌ಟಿಡಿ ಕರೆಗಳಿಗೆ 2...

ಭೂಕುಸಿತದಿಂದ ಸಿಕ್ಕಿಹಾಕಿಕೊಂಡ ಹಿಮಾಚಲ ಸಿಎಂ ವೀರಭದ್ರ ಸಿಂಗ್

Image
 ಉತ್ತರ ಭಾರತದಾದ್ಯಂತ ಭಾರಿ ಮಳೆಯಾಗುತ್ತಿದೆ. ಅವಧಿಗಿಂತ ಮುಂಚಿತವಾಗಿಯೇ ಕಾಲಿಟ್ಟಿರುವ ಕುಂಭ-ದ್ರೋಣ ಮಳೆಗೆ ಕನಿಷ್ಠ 60 ಮಂದಿ ಅಸುನೀಗಿದ್ದು, ಇತರ 60 ಮಂದಿ ನಾಪತ್ತೆಯಾಗಿದ್ದಾರೆ. ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶಗಳಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗಿದೆ. ಹಿಮಾಚಲ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪ್ರವಾಹದಿಂದಾಗಿ ಕಿನೌರ್ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಜತೆಗೆ ತೀರ್ಥಕ್ಷೇತ್ರಗಳಾದ ಉತ್ತರ ಕಾಶಿ, ರುದ್ರಪ್ರಯಾಗ, ಕೇದಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 24 ಸಾವಿರ ಮಂದಿ ತೀರ್ಥಯಾತ್ರಿಗಳು ಮಾರ್ಗ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಭಾರಿ ಮಳೆಯಿಂದಾಗಿ ವಾರ್ಷಿಕ ಕೈಲಾಸ್ ಮಾನಸ ಸರೋವರ ಯಾತ್ರೆ ರದ್ದುಗೊಳಿಸಲಾಗಿದೆ. ಕೊಚ್ಚಿಹೋದ 200 ವಾಹನ: ಉತ್ತರಾಖಂಡದಲ್ಲಿ ಈ ಬಾರಿಯ ಬಿರು ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ. ಅಲಕಾನಂದ ನದಿಯಲ್ಲಿನ ಪ್ರವಾಹಕ್ಕೆ 200 ವಾಹನಗಳು ಕೊಚ್ಚಿ ಹೋಗಿವೆ. ಚಮೋಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ 50 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಾಗಿರುವ  ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥ್‌ಗಳಿಗೆ ತೆರಳುವ ಪ್ರಮುಖ ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿದೆ. ಹೀಗಾಗಿ, ಯಾತ್ರಾರ್ಥಿಗಳು ಅಲ್ಲಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ. ಸುಮಾರು 24 ಸಾವಿರ...

`ಮೋದಿ ಮುಸ್ಲಿಂ ವಿರೋಧಿ’ ಎಂಬ ಅಪಪ್ರಚಾರ ಅದೆಷ್ಟು ಸತ್ಯ?

Image
ಮೋದಿಯವರನ್ನು ಬಿಜೆಪಿಯ ಕೆಲವರೂ ಸೇರಿದಂತೆ ಅನೇಕರು ವಿರೋಧಿಸುತ್ತಿದ್ದಾರೆಂದರೆ ಅವರೊಳಗೆ ಯಾವುದೋ ಭೀತಿ ಮನೆ ಮಾಡಿರಲೇಬೇಕು. ತಮ್ಮ ಸ್ವಾರ್ಥಿ ರಾಜಕಾರಣಕ್ಕೆ, ಸುಳ್ಳುಸೆಟೆಗಳಿಗೆ, ನಾನಾ ಬಗೆಯ ಅಪಸವ್ಯಗಳಿಗೆ ಮೋದಿ ಆಡಳಿತ ಪೂರ್ಣ ವಿರಾಮ ಹಾಕಬಹುದೆಂಬುದೇ ಆ ಭೀತಿ! ಕತ್ತಲೆಯನ್ನೇ ಇಷ್ಟಪಡುವ ಖದೀಮರು ಬೆಳಕನ್ನು ಖಂಡಿತ ಬಯಸಲಾರರು. ಅದರಲ್ಲೂ ಕಣ್ಣು ಚುಚ್ಚುವ ಪ್ರಖರ ಬೆಳಕು ನೋಡಿದೊಡನೆ ಅವರಿಗೆ ಜಂಘಾಬಲವೇ ಉಡುಗಿ ಹೋಗುವುದು ಸ್ವಾಭಾವಿಕ! ನರೇಂದ್ರ ಮೋದಿಯವರ ರಾಜಕೀಯ ವಿರೋಧಿಗಳ ಸಂಖ್ಯೆ ದಿನೇದಿನೇ ಏರತೊಡಗಿದೆಯೆ? ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯವರನ್ನು ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಿದ ಬಳಿಕ ಈ ಪ್ರಶ್ನೆಗೆ ಇನ್ನಷ್ಟು ಮಹತ್ವ ಬಂದಿದೆ. ಮೋದಿಯವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಲಾಗುವುದೆಂಬ ವದಂತಿ ಕಾರ್ಯಕಾರಿಣಿ ಸಭೆಗೆ ಮುನ್ನವೇ ಎಲ್ಲೆಡೆ ಹರಡಿತ್ತು. ಮಾಧ್ಯಮಗಳಲ್ಲಿ ಈ ಕುರಿತು ವರದಿಯೂ ಪ್ರಕಟವಾಗಿತ್ತು. ಇದೇ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಧುರೀಣ, ಮೋದಿಯವರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದ ಬಿಜೆಪಿಯ ಭೀಷ್ಮ ಎಲ್.ಕೆ.ಆಡ್ವಾಣಿ ಗೋವಾ ಸಭೆಗೆ ಗೈರು ಹಾಜರಾಗಿದ್ದುದು ಬಿಜೆಪಿಯಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದ ರಾಜಕೀಯದಲ್ಲೂ ಸಂಚಲನ ಮೂಡಿಸಿತ್ತು. ಆಡ್ವಾಣಿ ಗೈರು ಹಾಜರಿಗೆ ಹೊಟ್ಟೆ ನೋವು ಕಾರಣವೆಂದು ಹೇಳಲಾಯಿತಾದರೂ ಅದು ಹೊಟ್ಟೆ ನೋವಲ್ಲ, ಮೋದಿಯ...