ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿಗೆ ಭರ್ಜರಿ ಜಯ, ಎನ್‍ಎಸ್‍ಯುಐ ಹಾಗೂ ಸಿಎಫ್‍ಐಗೆ ತೀವ್ರ ಮುಖಭಂಗ.

ಮಂಗಳೂರು ಜು 22: ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆ ತುಂಬಾ ವರ್ಷಗಳಿಂದ ಕುತೂಹಲ ದಿಂದ ಕೂಡಿರುವ ಚುನಾವಣೆ. ಈ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ, ಎನ್‍ಎಸ್‍ಯುಐ ಹಾಗೂ ಸಿಎಫ್‍ಐ ಯ ಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಅದರಲ್ಲಿ ಒಟ್ಟು 31 ಸೀಟ್‍ನಲ್ಲಿ 26 ಸೀಟ್‍ಗಳನ್ನು ಎಬಿವಿಪಿ ಕಾರ್ಯಕರ್ತರು ಗೆಲ್ಲುವ ಮೂಲಕ ಭರ್ಜರಿ ಜಯವನ್ನು ಸಾಧಿಸಿದ್ದಾರೆ. ಕೇವಲ 5 ಸೀಟ್‍ನ್ನು ಪಡೆಯುವುದರ ಮೂಲಕ ಎನ್‍ಎಸ್‍ಯುಐ ತೀವ್ರ ಮುಖಭಂಗವನ್ನು ಅನುಭವಿಸಿದೆ. ಯಾವುದೇ ಖಾತೆಯನ್ನು ತೆರೆಯದೆ ಸಿಎಫ್‍ಐ ಸೋಲನುಂಡಿತು. ಈ ಚುನಾವಣೆಯು ದೇಶಭಕ್ತಿಯ ವಿಚಾರಕ್ಕೆ ಸಂದ ಜಯವಾಗಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ
ಕಾರ್ಯದರ್ಶಿಯಾಗಿ ಮಹೇಶ್ ರಾಜ್ ಮೂರನೇ ಬಿಎ ಲಲಿತಕಲಾ ಕಾರ್ಯದರ್ಶಿಯಾಗಿ ಅವಿನಾಶ್ ಮೂರನೇ ಬಿಎ ಜೊತೆ ಕಾರ್ಯದರ್ಶಿಯಾಗಿ ಶ್ವೇತಾ ಮೂರನೇ ಬಿಬಿಎಂ
ಜೊತೆ ಲಲಿತಕಲಾ ಕಾರ್ಯದರ್ಶಿಯಾಗಿ ಪವಿತ್ರಾ ಮೂರನೇ ಬಿಕಾಂ ಚುನಾವಣೆಯ ನಂತರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ರಾಜ್ಯ ಕಾರ್ಯದರ್ಶಿ ರಮೇಶ್ .ಕೆ, ನಗರ ಕಾರ್ಯದರ್ಶಿ ಯತೀಶ್ ಕುಮಾರ್. ಪಿ, ನಿಕಟಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರು ಪ್ರಸಾದ್, ತೇಜಸ್ಸು, ಯಶೋಧರ ಅಭಿನಂಧಿಸಿದರು.
ವಿಜಯೋತ್ಸವ: ಎಬಿವಿಪಿಯ ಕಾರ್ಯಕರ್ತರು 26 ಸೀಟು ಪಡೆದಿರುವ ಪ್ರಯುಕ್ತ ನಗರದ ವಿವಿ ಕಾಲೇಜಿನಿಂದ ಎ.ಬಿ ಶೆಟ್ಟಿ ವೃತ್ತ, ಕ್ಲಾಕ್ ಟವರ್ ವೃತ್ತ, ಕೆ.ಎಸ್ ರಾವ್ ರಸ್ತೆಯ ಮೂಲಕ ನವ ಭಾರತ ವೃತ್ತ, ಪಿವಿಎಸ್ ವೃತ್ತ, ಬೆಸೇಂಟ್ ವೃತ್ತ, ಮಹಾನಗರ ಪಾಲಿಕೆಯ ಮೂಲಕ ಗೋಕರ್ಣನಾಥೇಶ್ವರ ಕಾಲೇಜು, ಲೇಡಿಹಿಲ್ ವೃತ್ತ, ಲಾಲ್‍ಭಾಗ್, ಬಂಟ್ಸ್‍ಹಾಸ್ಟೆಲ್ ವೃತ್ತ, ಜ್ಯೋತಿ ವೃತ್ತದಿಂದ ಹಂಪನಕಟ್ಟೆಯ ತನಕ ಮೆರವಣಿಗೆ ನಡೆಸುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.



ಜಿಲ್ಲೆಯಾಧ್ಯಂತವಿರುವ ಪ್ರಮುಖ ಕಾಲೇಜಿನಲ್ಲಿ ಎಬಿವಿಪಿಗೆ ಜಯ:

ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ಕಾಲೇಜಿನಲ್ಲಿ ಎಬಿವಿಪಿಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಜಯಗೋಳಿಸುವ ಮೂಲಕ ಪ್ರಬಲ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದೆ. ಈಗಾಗಲೇ ಎಬಿವಿಪಿ ಕಾರ್ಯಕರ್ತರ ಜಯದಿಂದ ಕಾಂಗ್ರೇಸ್‍ಗೆ ಹತಾಶ ಭಾವನೆ ಸೃಷ್ಠಿಯಾಗಿದ್ದು. ಕಾಲೇಜುಗಳಲ್ಲಿ ಎಬಿವಿಪಿ ಕಾರ್ಯಕರ್ತರನ್ನು ಹಾಗೂ ಅನೇಕ ಉಪನ್ಯಾಸಕರ ಮೇಲೆ ಸೇಡು ತೀರಿಸಿಕೋಳ್ಳಲು ಈಗಾಗಲೇ ಪ್ರಯತ್ನವನ್ನು ಪ್ರಾರಂಭ ಮಾಡಿದೆ. ಇದಕ್ಕೋಸ್ಕರ ಸರ್ಕಾರಿ ಕಾಲೇಜಿನ ಪ್ರಾಚಾರ್ಯರನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯ ಮಾಡಲು ಹೊರಟಿರುವುದನ್ನು ಅಭಾವಿಪವು ಸಹಿಸುವುದಿಲ್ಲ. ಕ್ಯಾಂಪಸ್ ನಲ್ಲಿ ರಾಜಕೀಯ ಪ್ರವೇಶಕ್ಕೆ ಅಭಾವಿಪ ಅವಕಾಶ ಕೊಡುವುದಿಲ್ಲ ಹಾಗೂ ಎಬಿವಿಪಿ ಕಾರ್ಯಕರ್ತರನ್ನು ಕೆಣಕಿದರೆ ಸರಿಯಾದ ಉತ್ತರವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಎಬಿವಿಪಿ ರವಾನಿಸುತ್ತದೆ.



Comments

Popular posts from this blog

ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ