Posts

Showing posts from July, 2013

ಟೈಗರ್ ಹಿಲ್ಸ್ ಗೆದ್ದ ಟೈಗರ್‌ಗಳಿಗೆ ನಮನ

Image
Thanks To News13.   http://news13.in/2013/07/34450/ ಕಾರ್ಗಿಲ್ ಕದನ. ಅದೊಂದು ಭಾರತದ ಇತಿಹಾಸದಲ್ಲಿ ಮರೆಯಲಾರದ ಯುದ್ಧ. ಭಾರತ-ಪಾಕಿಸ್ತಾನಗಳ ನಡುವೆ ನಡೆದ ನಾಲ್ಕನೇ ಯುದ್ಧ. ಉಭಯ ದೇಶಗಳ ನಡುವೆ ಸುಧಾರಿಸಲಾರದಷ್ಟು ಸಂಬಂಧ ಹಳಸಿದೆ ಎನ್ನುವುದಕ್ಕೆ ಈ ಯುದ್ಧಗಳು ನಿದರ್ಶನ. ಮುಂದಿನ ಪೀಳಿಗೆ ನಮ್ಮ ಚರಿತ್ರೆಯ ಪುಟಗಳನ್ನು ತಿರುವಿ ಈ ಯುದ್ಧದ ವಿವರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಬಹುದು. ಏಕೆಂದರೆ ಈ ಯುದ್ಧ ಅಷ್ಟು ರೋಚಕವಾಗಿತ್ತು. ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿರುವ ಕಾರ್ಗಿಲ್ ಈ ಹಿಂದೆ ಒಂದು ಜಿಲ್ಲಾಕೇಂದ್ರದ ಹೆಸರಾಗಿ ಉಳಿದಿತ್ತು. ದೇಶವಾಸಿಗಳಿಗೆ ಆ ಹೆಸರು ಅಷ್ಟೇನೂ ಪರಿಚಿತವಾಗಿರಲಿಲ್ಲ. ಆದರೆ ಈಗ ಕಾರ್ಗಿಲ್ ಎಂದ ಕೂಡಲೇ ದೇಶವಾಸಿಗಳ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆಗಳ ಸಂಚಾರವಾಗುತ್ತದೆ. ಹಲವು ತೆರನಾದ ಭಾವನೆಗಳು ಉಕ್ಕಿ ಹರಿಯುತ್ತವೆ. ವಂಚನೆ, ಉದ್ವಿಗ್ನತೆ, ಕೋಪ, ದುಃಖ, ನಿರ್ಧಾರ, ಸಾಹಸ, ಪರಾಕ್ರಮ, ವಿಜಯ, ಸಂಭ್ರಮ – ಹೀಗೆ ಹತ್ತು ಹಲವು ಭಾವನೆಗಳು ಅನುರಣಿಸುತ್ತವೆ. 1999 ರ ಮೇ 8 ರಿಂದ ಜುಲೈ 14 ರವರೆಗೆ ನಡೆದ ಆ 74 ದಿನಗಳು, ದೇಶಾದ್ಯಂತ ಪೂರ್ತಿ ಕಾರ್ಗಿಲ್ ಯುದ್ಧದ್ದೇ ಸುದ್ದಿ. ಮಾಧ್ಯಮಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಯುದ್ಧದ ಸುದ್ದಿಗಳಿಗೇ ಆದ್ಯತೆ. ಉಳಿದೆಲ್ಲ ಕಾರ್ಯಕ್ರಮಗಳು ಮೂಲೆಗೆ. ಏನಾಯಿತು ಕಾರ್ಗಿಲ್‌ನಲ್ಲಿ ? ಇವತ್ತು ಪಾಕ್ ಶತ್ರುಗಳೆಷ್ಟು ಮಂದಿ ಸತ್ತರು ? ಭಾರ...

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿಗೆ ಭರ್ಜರಿ ಜಯ, ಎನ್‍ಎಸ್‍ಯುಐ ಹಾಗೂ ಸಿಎಫ್‍ಐಗೆ ತೀವ್ರ ಮುಖಭಂಗ.

Image
ಮಂಗಳೂರು ಜು 22: ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆ ತುಂಬಾ ವರ್ಷಗಳಿಂದ ಕುತೂಹಲ ದಿಂದ ಕೂಡಿರುವ ಚುನಾವಣೆ. ಈ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ, ಎನ್‍ಎಸ್‍ಯುಐ ಹಾಗೂ ಸಿಎಫ್‍ಐ ಯ ಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಅದರಲ್ಲಿ ಒಟ್ಟು 31 ಸೀಟ್‍ನಲ್ಲಿ 26 ಸೀಟ್‍ಗಳನ್ನು ಎಬಿವಿಪಿ ಕಾರ್ಯಕರ್ತರು ಗೆಲ್ಲುವ ಮೂಲಕ ಭರ್ಜರಿ ಜಯವನ್ನು ಸಾಧಿಸಿದ್ದಾರೆ. ಕೇವಲ 5 ಸೀಟ್‍ನ್ನು ಪಡೆಯುವುದರ ಮೂಲಕ ಎನ್‍ಎಸ್‍ಯುಐ ತೀವ್ರ ಮುಖಭಂಗವನ್ನು ಅನುಭವಿಸಿದೆ. ಯಾವುದೇ ಖಾತೆಯನ್ನು ತೆರೆಯದೆ ಸಿಎಫ್‍ಐ ಸೋಲನುಂಡಿತು. ಈ ಚುನಾವಣೆಯು ದೇಶಭಕ್ತಿಯ ವಿಚಾರಕ್ಕೆ ಸಂದ ಜಯವಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ ಕಾರ್ಯದರ್ಶಿಯಾಗಿ ಮಹೇಶ್ ರಾಜ್ ಮೂರನೇ ಬಿಎ ಲಲಿತಕಲಾ ಕಾರ್ಯದರ್ಶಿಯಾಗಿ ಅವಿನಾಶ್ ಮೂರನೇ ಬಿಎ ಜೊತೆ ಕಾರ್ಯದರ್ಶಿಯಾಗಿ ಶ್ವೇತಾ ಮೂರನೇ ಬಿಬಿಎಂ ಜೊತೆ ಲಲಿತಕಲಾ ಕಾರ್ಯದರ್ಶಿಯಾಗಿ ಪವಿತ್ರಾ ಮೂರನೇ ಬಿಕಾಂ ಚುನಾವಣೆಯ ನಂತರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ರಾಜ್ಯ ಕಾರ್ಯದರ್ಶಿ ರಮೇಶ್ .ಕೆ, ನಗರ  ಕಾರ್ಯದರ್ಶಿ ಯತೀಶ್ ಕುಮಾರ್. ಪಿ, ನಿಕಟಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರು ಪ್ರಸಾದ್, ತೇಜಸ್ಸು, ಯಶೋಧರ ಅಭಿನಂಧಿಸಿದರು. ವಿಜಯೋತ್ಸವ: ಎಬಿವಿಪಿಯ ಕಾರ್ಯಕರ್ತರು 26 ಸೀಟು...

ಇಂದು ಶ್ಯಾಮಪ್ರಸಾದ್‌ ಮುಖರ್ಜಿ, ವಿ.ಎಸ್‌. ಆಚಾರ್ಯ ಜನ್ಮದಿನ

Image
ಇಂದು ಶ್ಯಾಮಪ್ರಸಾದ್‌ ಮುಖರ್ಜಿ, ವಿ.ಎಸ್‌. ಆಚಾರ್ಯ ಜನ್ಮದಿನ by Udayavani | Jul 06, 2013 "ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ರಾಷ್ಟ್ರ ಧ್ವಜಗಳಿದ್ದರೆ ಅದು ರಾಷ್ಟ್ರೀಯತೆಗೆ ಅಪಮಾನ ಮತ್ತು ಅಪಚಾರ' -ಹೀಗೆಂದು ಲೋಕಸಭೆಯಲ್ಲಿ ಘರ್ಜಿಸಿದ ಭಾರತದ ಪಾರ್ಲಿಮೆಂಟಿನ ಸಿಂಹವೇ ಡಾ| ಶ್ಯಾಮಪ್ರಸಾದ್‌ ಮುಖರ್ಜಿ. 1950ರ ದಶಕದ ಆರಂಭದ ವರ್ಷಗಳಲ್ಲಿ ಭಾರತದ ಸಾರ್ವಭೌಮತೆಯ ಸಂಕೇತವಾದ ಸಂಸತ್ತಿನಲ್ಲಿ ಆಳುವ ಸರಕಾರದ ದುರ್ಬಲ ನೀತಿಗಳನ್ನು ತನ್ನ ನೇರ ಹಾಗೂ ಹರಿತವಾದ ಭಾಷಣ, ನಿರ್ದಾಕ್ಷಿಣ್ಯದ ಮುಕ್ತ ಶಬ್ದಗಳಿಂದ ಖಂಡಿಸುತ್ತಾ ಭಾರತದ ಅಂದಿನ ಪ್ರಧಾನಿ ನೆಹರೂ ಅವರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದ್ದ ಭಾರತದ ಕೇಸರಿಯೇ ಅಪ್ಪಟ ರಾಷ್ಟ್ರಭಕ್ತ ಡಾ| ಮುಖರ್ಜಿ.ಕೋಲ್ಕತ್ತದ ಅಶುತೋಷ್‌ ರಸ್ತೆಯ 77ನೇ ನಂಬರ್‌ ಮನೆಯಲ್ಲಿ 1901ರ ಜು.6 ರಂದು ಮುಖರ್ಜಿ ಜನಿಸಿದರು. ವಿದ್ಯಾರ್ಥಿ ಜೀವನ ದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬದುಕಿದರು, ಸಹಪಾಠಿಗಳಲ್ಲಿ ರಾಷ್ಟ್ರಾಭಿಮಾನ ಉಕ್ಕುವಂತೆ ವರ್ತಿಸುತ್ತಿದ್ದರು.ಉನ್ನತ ಶಿಕ್ಷಣ ಪಡೆದ ಮುಖರ್ಜಿ ತಮ್ಮ 33ನೇ ವರ್ಷದಲ್ಲಿ ಕೋಲ್ಕತ್ತಾ ವಿವಿಯ ಉಪಕುಲಪತಿಯಾಗಿ ನೇಮಕಗೊಂಡು ಈ ಘನಹುದ್ದೆ ಅಲಂಕರಿಸಿದ ಅತಿ ಕಿರಿಯನೆಂಬ ದಾಖಲೆ ನಿರ್ಮಿಸಿದರು.ತಾವು ನಂಬಿದ ಸಿದ್ಧಾಂತದೆದುರು ಕೇಂದ್ರದ ಮಂತ್ರಿಸ್ಥಾನವೂ ಸೇರಿದಂತೆ ಎಲ್ಲಾ ಅಧಿಕಾರಗಳೂ ಮುಖರ್ಜಿಯವರಿಗೆ ತೃಣ ಸಮಾನವಾಗಿದ್ದವು. ಸ್ವತ...

Congratulations to scientists of ISRO on successful launch of India's 1st dedicated navigation satellite, IRNSS-1A: Shri Modi on Twitter

Image
Photo Credits: ISRO Website On the afternoon of Tuesday 2 nd  July 2013 Shri Narendra Modi extended his congratulations to scientists of ISRO on the successful launch of IRNSS-1A, India’s first dedicated navigational satellite. Shri Modi Tweeted,   “Congratulations to scientists of ISRO on successful launch of India’s 1st dedicated navigation satellite, IRNSS-1A.” Photo Credits: ISRO Website

ಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ ರೂಪಾಯಿಗೊಂದು ಕೆಜಿ ಅಕ್ಕಿ!

Image
ಬೆತ್ತಲೆ ಪ್ರಪಂಚ - ಪ್ರತಾಪ್ ಸಿಂಹ ಖ್ಯಾತ ಸಾಹಿತಿ ಬೀChiಯುವರ 'ಬೆಳ್ಳಿ ತಿಂಮ ನೂರೆಂಟು ಹೇಳಿದ' ಪುಸ್ತಕದಲ್ಲಿ ಒಬ್ಬ ರಾಜಕಾರಣಿಯ ಕಥೆ ಬರುತ್ತದೆ. ಮೈದಾನಕ್ಕೆ ಕಾಪೌಂಡ್ ಇಲ್ಲ, ಭಾಷಣಕ್ಕೆ ಇತಿಮಿತಿಯಿಲ್ಲ, ಹೇಳುವವರಿಗೆ ಬೇಸರವಿಲ್ಲ, ಕೇಳುವವರಿಗೆ ಬೇರೆ ಕೆಲಸವಿಲ್ಲ. ರಾಜಕಾರಣಿಯ ಭಾಷಣ ಹರಿಯಿತು, ಊರ ಮಧ್ಯೆಯ ಗಟಾರದಂತೆ. ರಾಜಕಾರಣಿ: ಇಂದು ನಮ್ಮ ಜನಕ್ಕೆ ಏನು ಬೇಕು ಹೈಡ್ರೋಜನ್, ಆಟಂ ಬಾಂಬುಗಳೇನು? 'ಅಲ್ಲ, ಅಲ್ಲ..' ಎಂದು ಒಕ್ಕೊರಲಿನಿಂದ ಕೂಗಿತು ಸಭೆ. ರಾಜಕಾರಣಿ: ಸಾವಿರಾರು ಮೈಲು ಸಮುದ್ರವನ್ನು ಹಾರುವ ವಿಮಾನವೇನು? ಜನ: ಅಲ್ಲ, ಅಲ್ಲ! ಅದರಿಂದ ಉತ್ತೇಜಿತನಾದ ರಾಜಕಾರಣಿ ಹೇಳಿದ-'ನಮಗೆ ಬೇಕಿರುವುದು ಶರವೇಗದ ರೈಲು ಗಾಡಿಯಲ್ಲ, ಲಗ್ಝುರಿ ಬಸ್‌ಗಳಲ್ಲ, ಜೇಡರಗೂಡಿನಂಥ ಬಟ್ಟೆಯಲ್ಲ. ಇಂದು ನಮಗೆ ಬೇಕಿರುವುದು......' ಅಷ್ಟರಲ್ಲಿ ಸೋಮಾರಿಗಳ ಮಹಾಸಭೆಯಿಂದ ಕರತಾಡನ... ರಾಜಕಾರಣಿ: ಇಂದು ನಮಗೆ ಏನು ಬೇಕು? ನಮ್ಮ ಭೂತಾಯಿಯ ಚೊಚ್ಚಲ ಮಗನಾದ ರೈತನಿಗೆ, ಅನುದಿನವೂ ದುಡಿಯುವ ಕೂಲಿಗೆ, ಪ್ರತಿಯೊಬ್ಬನಿಗೂ ಬೇಕು ಅನ್ನ.. ಅನ್ನ! ಜನ: ಅಹುದು, ಅಹುದಹುದು! ರಾಜಕಾರಣಿ: ನಮ್ಮ ಬಡವನ ರೂಪಾಯಿಗೆ ಹತ್ತು ಸೇರಿನ ಅಕ್ಕಿ ಬೇಕು! ನಮ್ಮ ಕರ್ನಾಟಕದ ಮುಂದಿನ ಸರ್ಕಾರವನ್ನು ರಚಿಸಲು ಅಣಿಯಾಗುತ್ತಿರುವ ಕಾಂಗ್ರೆಸ್ ಹಾಗೂ ಈ ಹಿಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಗಬ್ಬೆಬ್ಬಿಸಿದ ಬಿಜೆಪಿ ಇವುಗಳೆರಡೂ ಬ...