ಮೂಢನಂಬಿಕೆ ವಿರೋಧಿ ಸಿಎಂ ಸಿದ್ದು ನಿನ್ನೆ ಮಾಡಿದ್ದೇನು? Read more at: http://kannada.oneindia.in/news/karnataka/anti-superstitionist-cm-siddaramaiah-follows-rahu-kaal-079115.html
ಬೆಂಗಳೂರು, ನ.9: ರಾಜ್ಯದ ಜನತೆ ಮೇಲೆ ಮೂಢನಂಬಿಕೆ ನಿಷೇಧ ರಾಕೆಟ್ಟನ್ನು ಹಾರಿಸಲು ಸಿದ್ಧತೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಶುಭ ಶುಕ್ರವಾರ ಭರಪೂರವಾಗಿ ಮೂಢನಂಬಿಕೆ ಆಚರಿಸಿ ಸಂಭ್ರಮಿಸಿದ್ದಾರೆ. ಅದೂ ಒಂದಲ್ಲ, ಎರಡು ಬಾರಿ ಸಿದ್ದರಾಮಯ್ಯನವರ ಮೌಢ್ಯತೆ ಜಗಜ್ಜಾಹೀರಾಗಿ ಹರಾಜಾಯಿತು. ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಚಿಕ್ಕಬಳ್ಳಾಪುರ-ಕೋಲಾರ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಡಿನ ಮುಖ್ಯಮಂತ್ರಿ ಮೂಢನಂಬಿಕೆ ವಿರುದ್ಧ ಹೈಸ್ಪೀಡಿನಲ್ಲಿದ್ದಾರೆ. ಜತೆಗೆ ಅವರಿಗೆ ಕಂದಾಚಾರಗಳು ಆಗಿಬರುವುದಿಲ್ಲ ಎಂಬುದನ್ನು ತಿಳಿದುಕೊಂಡ ರೈಲ್ವೆ ಅಧಿಕಾರಿಗಳು ಕಾರ್ಯಕ್ರಮವನ್ನು ರಾಹುಕಾಲದಲ್ಲಿಯೇ ನಿಗದಿಪಡಿಸಿ ಯಾವುದೋ ಕಾಲವಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಎಚ್ಚೆತ್ತ ಸಿಎಂ ಸಿಬ್ಬಂದಿ ರಾಹುಕಾಲದಲ್ಲಿ ಉದ್ಘಾಟನೆ ಸಮಾರಂಭ ಬೇಡವೇ ಬೇಡ. ತಡವಾದರೂ ಪರವಾಗಿಲ್ಲ ಎಂದು ಸಿದ್ದರಾಮಯ್ಯ ಅವರನ್ನು 90 ನಿಮಿಷ ಕಾಲ ಕಾಯುವಂತೆ ಮಾಡಿ, ರಾಹುಕಾಲ ಮುಗಿದ ನಂತರ ಕಾರ್ಯಕ್ರಮ ಶುರು ಹಚ್ಚಿಕೊಂಡರು. ಗಮನಾರ್ಹವೆಂದರೆ ಸಿಎಂ ಸಿದ್ದು ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ತನ್ಮೂಲಕ ತಾವೂ ಮೂಢನಂಬಿಕೆಗೆ ಆತೀತರಲ್ಲ ಎಂಬುದನ್ನು ಸಾರಿ ಹೇಳಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ನಂದಿ ರಂಗಮಂದಿರದಲ್ಲಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಮಧ...